Source :- ONE INDIA NEWS
India
oi-Mamatha M
ನವದೆಹಲಿ,
ಮೇ.
07
:
ಇದೀಗ
ರದ್ದುಗೊಂಡಿರುವ
ದೆಹಲಿ
ಅಬಕಾರಿ
ನೀತಿಗೆ
ಸಂಬಂಧಿಸಿದ
ಅಕ್ರಮ
ಹಣ
ವರ್ಗಾವಣೆ
ಪ್ರಕರಣದಲ್ಲಿ
ದೆಹಲಿ
ನ್ಯಾಯಾಲಯವು
ಮಂಗಳವಾರ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಅವರ
ನ್ಯಾಯಾಂಗ
ಬಂಧನವನ್ನು
ಮೇ
20
ರವರೆಗೆ
ವಿಸ್ತರಿಸಿದೆ.
ಈ
ಹಿಂದೆ
ನೀಡಲಾಗಿದ್ದ
ಕಸ್ಟಡಿ
ಅವಧಿ
ಮುಕ್ತಾಯವಾದ
ಹಿನ್ನೆಲೆಯಲ್ಲಿ
ಅರವಿಂದ್
ಕೇಜ್ರಿವಾಲ್
ಅವರನ್ನು
ವಿಡಿಯೋ
ಕಾನ್ಫರೆನ್ಸ್
ಮೂಲಕ
ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿತ್ತು.
ಸಿಬಿಐ
ಮತ್ತು
ಇಡಿ
ವಿಶೇಷ
ನ್ಯಾಯಾಧೀಶ
ಕಾವೇರಿ
ಬವೇಜಾ
ಸಹ
ಆರೋಪಿ
ಚನ್ಪ್ರೀತ್
ಸಿಂಗ್
ಅವರ
ನ್ಯಾಯಾಂಗ
ಬಂಧನವನ್ನು
ಮೇ
20
ರವರೆಗೆ
ವಿಸ್ತರಿಸಿದ್ದಾರೆ.
ಇನ್ನು,
ಲೋಕಸಭೆ
ಚುನಾವಣೆ
2024
ರ
ಮಧ್ಯೆ
ದೆಹಲಿ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಅವರ
ಜಾಮೀನು
ಅರ್ಜಿಯನ್ನು
ಸುಪ್ರೀಂ
ಕೋರ್ಟ್
ಇಂದು
(ಮೇ
7)
ವಿಚಾರಣೆ
ನಡೆಸುತ್ತಿದೆ.
ಕಳೆದ
ವಾರ,
ಎಎಪಿ
ಮುಖ್ಯಸ್ಥರಿಗೆ
ಮಧ್ಯಂತರ
ಜಾಮೀನನ್ನು
ಪರಿಗಣಿಸಲು
ಮುಕ್ತವಾಗಿದೆ
ಎಂದು
ನ್ಯಾಯಾಲಯವು
ಅಭಿಪ್ರಾಯ
ವ್ಯಕ್ತಪಡಿಸಿದೆ.
Gandhi:
ರಾಹುಲ್
ಗಾಂಧಿ
ಯಾವಾಗಲೂ
ವೈಟ್
ಟೀ
ಶರ್ಟ್
ಧರಿಸೋದು
ಯಾಕೆ?
ವಿಚಾರಣೆಗೆ
ಸಿದ್ಧವಾಗುವಂತೆ
ಜಾರಿ
ನಿರ್ದೇಶನಾಲಯವನ್ನು
(ಇಡಿ)
ಒತ್ತಾಯಿಸಿದ
ಸುಪ್ರೀಂ
ಕೋರ್ಟ್,
“ನಾವು
ಜಾಮೀನು
ನೀಡಬಹುದು
ಅಥವಾ
ನೀಡದೇ
ಇರಬಹುದು”
ಎಂದಿದೆ.
ನ್ಯಾಯಮೂರ್ತಿಗಳಾದ
ಸಂಜೀವ್
ಖನ್ನಾ
ಮತ್ತು
ದೀಪಂಕರ್
ದತ್ತಾ
ಅವರ
ದ್ವಿಸದಸ್ಯ
ಪೀಠವು
ಕೇಜ್ರಿವಾಲ್ಗೆ
ಮಧ್ಯಂತರ
ಜಾಮೀನಿನ
ಪ್ರಶ್ನೆಯನ್ನು
ಪರಿಗಣಿಸಬಹುದು
ಎಂದು
ತಿಳಿಸಿದೆ.
ಸುಪ್ರೀಂ
ಕೋರ್ಟ್ನಲ್ಲಿ
ಜಾರಿ
ನಿರ್ದೇಶನಾಲಯದ
ಇಡಿ
ಪರ
ವಾದ
ಮಂಡಿಸಿದ
ಸಾಲಿಸಿಟರ್
ಜನರಲ್
ತುಷಾರ್
ಮೆಹ್ತಾ
ಅವರು,
ಮಧ್ಯಂತರ
ಜಾಮೀನು
ಕುರಿತು
ಸುಪ್ರೀಂ
ಕೋರ್ಟ್
ವಾದ
ಆಲಿಸಿದ್ದಕ್ಕೆ
ಆಕ್ಷೇಪ
ವ್ಯಕ್ತಪಡಿಸಿದ್ದಾರೆ.
ನಾವು
ಯಾವ
ಉದಾಹರಣೆ
ನೀಡುತ್ತಿದ್ದೇವೆ?
ಮುಖ್ಯಮಂತ್ರಿಗಿಂತ
ಇತರ
ವ್ಯಕ್ತಿಗಳು
ಕಡಿಮೆಯೇ?,
ಮುಖ್ಯಮಂತ್ರಿಯನ್ನು
‘ಆಮ್
ಆದ್ಮಿ’ಗಿಂತ
ಭಿನ್ನವಾಗಿ
ಹೇಗೆ
ನಡೆಸಿಕೊಳ್ಳಬಹುದು.
ಅವರು
ಮುಖ್ಯಮಂತ್ರಿ
ಎಂಬ
ಕಾರಣಕ್ಕೆ
ಯಾವುದೇ
ಪ್ರಮುಖ್ಯತೆ
ನೀಡಬಾರದು
ಎಂದು
ವಾದಿಸಿದ್ದಾರೆ.
ವಿಚಾರಣೆಯ
ಸಂದರ್ಭದಲ್ಲಿ,
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಅವರಿಗೆ
ಮಧ್ಯಂತರ
ಜಾಮೀನು
ನೀಡಿದರೇ
ಅವರು
ಅಧಿಕೃತ
ಕರ್ತವ್ಯಗಳನ್ನು
ನಿರ್ವಹಿಸುವುದರಿಂದ
ದೂರವಿರಬೇಕು
ಎಂಬ
ಷರತ್ತು
ಬರುತ್ತದೆ
ಎಂದು
ಕೇಜ್ರಿವಾಲ್
ಅವರ
ವಕೀಲರಿಗೆ
ಸುಪ್ರೀಂ
ಕೋರ್ಟ್
ಹೇಳಿದೆ.
English summary
Arvind Kejriwal: No interim bail for Delhi Chief Minister Arvind Kejriwal, delhi court on Tuesday extended the judicial custody till May 20 in excise policy case. Know more.
Story first published: Tuesday, May 7, 2024, 15:20 [IST]