Source :- ONE INDIA NEWS
Karnataka
oi-Reshma P
ಬೆಳಗಾವಿ,
ಮೇ.07:
ಹಾಸನ
ಸಂಸದ
ಪ್ರಜ್ವಲ್
ರೇವಣ್ಣ
ಅವರ
ಪೆನ್
ಡ್ರೈವ್
ಪ್ರಕರಣ
ಭಾರೀ
ಸದ್ದು
ಮಾಡುತ್ತಿದೆ.
ಇದರ
ನಡುವೆ
ಗೋಕಾಕ್
ಸಾಹುಕಾರ್
ಹಾಗೂ
ಮಾಜಿ
ಸಚಿವ
ರಮೇಶ್
ಜಾರಕಿಹೊಳಿ
ಹೊಸ
ಬಾಂಬ್
ಸಿಡಿಸಿದ್ದಾರೆ.
ಹೌದು,
ಗೋಕಾಕ್
ನಲ್ಲಿ
ಮಾಧ್ಯಮಗಳ
ಜೊತೆಗೆ
ಮಾಜಿ
ಸಚಿವ
ರಮೇಶ್
ಜಾರಕಿಹೊಳಿ
ಮಾತನಾಡಿ,
ಮುಂದೆ
ಸಿಎಂ
ಸಿದ್ದರಾಮಯ್ಯ
ಮತ್ತು
ಗೃಹ
ಸಚಿವ
ಡಾ.ಜಿ.
ಪರಮೇಶ್ವರ
ಅವರ
ಸಿಡಿ
ಬರಬಹುದು
ಎಂದು
ಹೇಳುವ
ಮೂಲಕ
ಮಾಜಿ
ಸಚಿವ
ರಮೇಶ್
ಜಾರಕಿಹೊಳಿ
ಹೊಸ
ಬಾಂಬ್
ಸಿಡಿಸಿದ್ದಾರೆ.
ಜೊತೆಗೆ
ಪ್ರಜ್ವಲ್
ಕೇಸ್ನಲ್ಲಿ
ಡಿಸಿಎಂ
ಡಿಕೆ
ಶಿವಕುಮಾರ್
ಆಡಿಯೋ
ಸುತ್ತು
ಹಾಕಿ
ಇದೆ.
ನನ್ನ
ಪ್ರಕರಣದಲ್ಲಿ
ಡಿಕೆ
ನೇರವಾಗಿ
ಭಾಗಿಯಾಗಿರುವ
ಬಗ್ಗೆ
ಸಾಕ್ಷ್ಯಗಳಿವೆ
ಎಂದು
ಹೇಳಿದ್ದಾರೆ.
ಸಿದ್ದರಾಮಯ್ಯ
ಮತ್ತು
ಪರಮೇಶ್ವರ
ಅವರದ್ದು
ಮುಂದೆ
ಬರಬಹುದು(ಸಿಡಿ).
ಮೊದಲಿನಿಂದ
ಸಿಡಿ
ವಿಚಾರದ
ಕುರಿತು
ಪದೇ
ಪದೇ
ಹೇಳಿಕೊಂಡು
ಬಂದಿದ್ದೆ,
ಆಗ
ಎಲ್ಲರೂ
ನನ್ನಾ
ನೆಗ್ಲೆಟ್
ಮಾಡಿದ್ರೂ
ನಗ್ತಾ
ಕೂತಿದ್ರೂ.
ಇವತ್ತು
ಒಬ್ಬರಿಗೆ
ಆಗಿದೆ
ಮುಂದೆ
ಸಿದ್ದರಾಮಯ್ಯಗೂ
ಬರಬಹುದು,
ಪರಮೇಶ್ವರ
ಅವರಿಗೂ
ಬರಬಹುದು.
ದಯವಿಟ್ಟು
ಗೃಹ
ಸಚಿವರು,
ಮುಖ್ಯಮಂತ್ರಿಗಳು
ಪಕ್ಷಾತೀತವಾಗಿ
ಇತಿಶ್ರೀ
ಹಾಡಬೇಕು.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರಿಗೆ
ಕೈ
ಮುಗಿದು
ಕೇಳಿಕೊಳ್ಳುತ್ತೇನೆ
ಎಂದ
ರಮೇಶ್
ಜಾರಕಿಹೊಳಿ
ಹೇಳಿದರು.
ಪ್ರಜ್ವಲ್
ರೇವಣ್ಣ
ಕೇಸ್
ನಲ್ಲಿ
ಡಿಕೆ
ಶಿವಕುಮಾರ್
ಆಡಿಯೋ
ರಿಲೀಸ್
ವಿಚಾರವಾಗಿ
ಮಾತನಾಡಿ,
ಆಡಿಯೋ
ಸುತ್ತು
ಹಾಕಿ
ಇದೆ,
ನನ್ನ
ಕೇಸ್
ನಲ್ಲಿ
ನೇರವಾಗಿ
ಇರೋದು
ಇದೆ.
ಡಿ
ಕೆ
ಶಿವಕುಮಾರ್
ನೇರವಾಗಿ
ಭಾಗಿಯಾದ
ಬಗ್ಗೆ
ನನ್ನ
ಬಳಿ
ಸಾಕ್ಷಿ
ಇವೆ.
ಈ
ಕೇಸ್
ನಲ್ಲಿ
ಡಿಕೆ
ಶಿವಕುಮಾರ್
ಭಾಗಿಯಾಗಿರುವುದು
ನೇರವಾಗಿ
ಇರುವುದು
ಇದೆ.
ಅವರ
ಬಳಿ
ಅಲ್ಲಿ
ಇಲ್ಲಿ
ಅಂತಾ
ಸುತ್ತು
ಹಾಕಿರೋದು
ಇದು.
ನನ್ನ
ಕೇಸ್
ನಲ್ಲಿ
ಡಿಕೆ
ಶಿವಕುಮಾರ್
ಮಾತಾಡಿದ್ದೆ
ಕೊಡುತ್ತೇನೆ
ನನ್ನ
ಬಗ್ಗೆ
ಷಡ್ಯಂತ್ರ
ಮಾಡಿದ್ದು
ಇದೆ
ಆದ್ರೇ
ಮಾಧ್ಯಮದ
ಮುಂದೆ
ಕೊಡಲ್ಲ.
ಸಿಬಿಐಗೆ
ಕೇಸ್
ಕೊಟ್ರೇ
ಸಾಕ್ಷಿ
ಕೊಡುತ್ತೇನೆ,
ನನ್ನ
ಕೇಸ್
ನಲ್ಲೂ
ಎಸ್ಐಟಿ
ವಿಶ್ವಾಸ
ಇಲ್ಲಾ,
ಈಗಲೂ
ಎಸ್ಐಟಿ
ಮೇಲೆ
ವಿಶ್ವಾಸ
ಇಲ್ಲ.
ಸಿಬಿಐಗೆ
ಕೇಸ್
ಕೊಟ್ರೂ
ಹಾಲಿ
ಸುಪ್ರೀಂ
ಕೋರ್ಟ್
ನ್ಯಾಯಾಧೀಶರ
ಮೇಲುಸ್ತುವಾರಿ
ಮಾಡಬೇಕು.
ಮಹಾನ್
ನಾಯಕ
ಹಣದಲ್ಲಿ
ಬಹಳಷ್ಟು
ಪ್ರಭಾವಿ
ಇದಾರೆ.
ಹಣ
ಕೊಟ್ಟು
ಎಲ್ಲವನ್ನೂ
ಖರೀದಿ
ಮಾಡಬೇಕು
ಅನ್ನೋ
ಸೊಕ್ಕು
ಇದೆ.
ದೇಶದಲ್ಲಿ
ಕಾನೂನು
ಉಳಿಯಬೇಕು
ಅಂದ್ರೆ
ಈ
ಕೇಸ್
ನಲ್ಲಿ
ಫಿಕ್ಸ್
ಆಗಬೇಕು
ಎಂದು
ಪರೋಕ್ಷವಾಗಿ
ಡಿ
ಕೆ
ಶಿವಕುಮಾರ್
ವಿರುದ್ಧ
ವಾಗ್ದಾಳಿ
ನಡೆಸಿದರು.
ನನ್ನ
ಕೇಸ್
ನಲ್ಲಿ
ಬರೀ
ಡಿಕೆ
ಶಿವಕುಮಾರ್
ಭಾಗಿಯಾಗಿಲ್ಲ.
ನಮ್ಮವರೂ
ಕೇಸ್
ನಲ್ಲಿ
ಇದ್ದಾರೆ
ಜೂನ್
4ರ
ನಂತರ
ಎಲ್ಲವನ್ನೂ
ಬಹಿರಂಗ
ಪಡಿಸುತ್ತೇನೆ.
ಸತತ
ನಾಲ್ಕು
ವರ್ಷದಿಂದ
ಕೊಷನ್
ಮಾರ್ಕ್
ಇದೆ.ಇದೆಲ್ಲದಕ್ಕೂ
ಜೂನ್
4ರ
ನಂತರ
ಇತಿಶ್ರೀ
ಹಾಡೋಣ.
ಪ್ರಜ್ವಲ್
ರೇವಣ್ಣ
ಕೇಸ್
ಯಾರು
ಹೆಮ್ಮೆ
ಪಡುವ
ವಿಷಯ
ಅಲ್ಲ,
ಎಲ್ಲರೂ
ತಲೆ
ತಗ್ಗಿಸುವ
ವಿಷಯ,
ಬಹಳ
ಕೆಟ್ಟ
ಪ್ರಮಾಣದಲ್ಲಿ
ಆಗಿದೆ.ರೇವಣ್ಣ
ಕಾನೂನು
ರೀತಿ
ಹೋರಾಟ
ಮಾಡಲಿ.
ಕಾನೂನು
ಒಂದೇ
ಅದಕ್ಕೆ
ಉತ್ತರ
ಎಂದು
ಮಾಜಿ
ಸಚಿವ
ರಮೇಶ್
ಜಾರಕಿಹೊಳಿ
ಹೇಳಿದರು.
English summary
prajwal revanna pendrive case: Next CM Siddaramaiah And Home Minister Parameshwar CD May Release Says Ramesh Jarkiholi:
Story first published: Tuesday, May 7, 2024, 12:46 [IST]