Source :- ONE INDIA NEWS
Karnataka
oi-Reshma P
ರಾಮನಗರ,
ಮಾರ್ಚ್
28:ಕೋವಿಡ್
ಸಮಯದಲ್ಲಿ
ಜನರು
ಕಷ್ಟಕ್ಕೆ
ಸಿಲುಕಿದ್ದಾಗ
ಅವರ
ಪರವಾಗಿ
ನಿಂತಿದ್ದು
ಡಿ.ಕೆ.
ಸುರೇಶ್.
ಇದು
ಮಾನವೀಯತೆ,
ಹೃದಯವಂತಿಕೆಯಲ್ಲವೇ?
ಕೋವಿಡ್
ಸಮಯದಲ್ಲಿ
ಕುಮಾರಸ್ವಾಮಿ
ಹಾಗೂ
ಅವರ
ಕುಟುಂಬದವರು
ಎಲ್ಲಿ
ಹೋಗಿದ್ದರು?”
ಎಂದು
ಡಿಸಿಎಂ
ಡಿ.ಕೆ.
ಶಿವಕುಮಾರ್
ವಾಗ್ದಾಳಿ
ನಡೆಸಿದರು.
ಬೆಂಗಳೂರು
ಗ್ರಾಮಾಂತರ
ಲೋಕಸಭೆ
ಕ್ಷೇತ್ರದಿಂದ
ಮರುಆಯ್ಕೆ
ಬಯಸಿರುವ
ಕಾಂಗ್ರೆಸ್
ಅಭ್ಯರ್ಥಿ
ಡಿ
ಕೆ
ಸುರೇಶ್
ಅವರು
ಗುರುವಾರ
ನಾಮಪತ್ರ
ಸಲ್ಲಿಸಿದ
ಸಂದರ್ಭದಲ್ಲಿ
ಕಾರ್ಯಕರ್ತರನ್ನು
ಉದ್ದೇಶಿಸಿ
ಮಾತನಾಡಿದ
ಡಿ.ಕೆ.
ಶಿವಕುಮಾರ್
ಅವರು,
ನನಗೆ
ಕುಮಾರಸ್ವಾಮಿ
ಅವರ
ವಿಚಾರ
ಮಾತನಾಡಲು
ಇಷ್ಟವಿಲ್ಲ.
ಆದರೂ
ಅವರಿಗೆ
ಒಂದು
ವಿಚಾರ
ಕೇಳಬಯಸುತ್ತೇನೆ.
ನೀವು
ಈ
ಜಿಲ್ಲೆಯ
ಕ್ಷೇತ್ರವೊಂದರ
ಶಾಸಕರು.
ಕೋವಿಡ್
ಬಂದಾಗ
ಈ
ಭಾಗದ
ಬಡವರ
ರಕ್ಷಣೆಗೆ
ನೀವು
ಯಾರಾದರೂ
ಒಬ್ಬರು
ಮುಂದೆ
ಬಂದರಾ?
ಇಲ್ಲ.
ಆದರೆ,
ಡಿ.ಕೆ
ಸುರೇಶ್
ಅವರು
ಪ್ರತಿ
ಕುಟುಂಬಕ್ಕೆ
ಆಹಾರ
ಪದಾರ್ಥ,
ಮೆಡಿಕಲ್
ಕಿಟ್
ವಿತರಿಸಿದರು.
ರೈತರಿಗೆ
ಮಾರುಕಟ್ಟೆ
ಇಲ್ಲದಾಗ,
ರೈತರು
ಬೆಳೆದ
ತರಕಾರಿಗಳನ್ನು
ಅವರ
ಜಮೀನಿನಿಂದ
ಖರೀದಿ
ಮಾಡಿದರು.
ಕೋಟ್ಯಂತರ
ರೂಪಾಯಿ
ಖರ್ಚು
ಮಾಡಿ
ತರಕಾರಿ
ಖರೀದಿಸಿ
ಅದನ್ನು
ಜನಸಾಮಾನ್ಯರಿಗೆ
ಉಚಿತವಾಗಿ
ಹಂಚಿದ್ದಾರೆ.
ಆ
ಮೂಲಕ
ರೈತರು
ಹಾಗೂ
ಬಡವರನ್ನು
ರಕ್ಷಣೆ
ಮಾಡಿದ್ದಾರೆ
ಎಂದು
ಹೇಳಿದರು.
Rural
Constituency:
ಡಿಕೆ
ಸುರೇಶ್
ಕಟ್ಟಿಹಾಕಲು
ಎಚ್ಡಿ
ಕುಮಾರಸ್ವಾಮಿ-ಅಮಿತ್
ಶಾ
ಮಾಸ್ಟರ್
ಪ್ಲ್ಯಾನ್!
ಸರ್ಕಾರ
ಶವಗಳನ್ನು
ಜೆಸಿಬಿಯಲ್ಲಿ
ಎಸೆಯುತ್ತಿರುವಾಗ,
ಕೋವಿಡ್
ನಿಂದ
ಮೃತಪಟ್ಟವರ
ಅಂತ್ಯಸಂಸ್ಕಾರಕ್ಕೆ
ಅವರ
ಮನೆಯವರು
ಮುಂದೆ
ಬಾರದಿದ್ದಾಗ
ಡಿ.ಕೆ
ಸುರೇಶ್
ಪಿಪಿಇ
ಕಿಟ್
ಧರಿಸಿ
ಅನಾಥ
ಶವಗಳ
ಅಂತ್ಯ
ಸಂಸ್ಕಾರ
ಮಾಡಿದರು.
ಇನ್ನು
ಕೋವಿಡ್
ಆಸ್ಪತ್ರೆಗಳಲ್ಲಿ
ಅವ್ಯವಸ್ಥೆ
ಇದ್ದಾಗ,
ಸುರೇಶ್
ಅವರು
ತಾವೇ
ಖುದ್ದಾಗಿ
ಪಿಪಿಇ
ಕಿಟ್
ಧರಿಸಿ
ಕೋವಿಡ್
ವಾರ್ಡ್
ಒಳಗೆ
ಹೋಗಿ,
ಸೋಂಕಿತರ
ಸಮಸ್ಯೆ
ಆಲಿಸಿದರು.
ಅವರಿಗೆ
ಧೈರ್ಯ
ತುಂಬಿದರು.
ಇದು
ಮಾನವೀಯತೆ
ಅಲ್ಲವೇ?
ಇದು
ಹೃದಯವಂತಿಕೆಯಲ್ಲವೇ?
ಕುಮಾರಣ್ಣ
ಆಗ
ಎಲ್ಲಿ
ಹೋಗಿದ್ದರು?
ಅವರ
ಅಭ್ಯರ್ಥಿ
ಎಲ್ಲಿ
ಹೋಗಿದ್ದರು?
ಅವರ
ಕುಟುಂಬ
ಎಲ್ಲಿ
ಹೋಗಿತ್ತು?
ಎಂದು
ಪ್ರಶ್ನಿಸಿದರು.
ಕಷ್ಟಕಾಲದಲ್ಲಿ
ಜನರಿಗೆ
ಸಹಾಯ
ಮಾಡಲು
ಕುಮಾರಸ್ವಾಮಿ
ಅವರಿಂದ
ಆಗಲಿಲ್ಲ.
ರಾಮನಗರದಲ್ಲಿರುವ
ಆಸ್ಪತ್ರೆ
ಕಟ್ಟಿಸಿದವರು
ಯಾರು?
ಸಿದ್ದರಾಮಯ್ಯ
ಅವರ
ಸರ್ಕಾರದಲ್ಲಿ
ಈ
ಡಿ.ಕೆ.
ಶಿವಕುಮಾರ್
ಕಟ್ಟಿಸಿದ್ದು.
ಅಲ್ಲಮಪ್ರಭುಗಳು
ಒಂದು
ಮಾತು
ಹೇಳುತ್ತಾರೆ.
ಕೊಟ್ಟ
ಕುದುರೆಯನು
ಏರಲರಿಯದೇ
ಮತ್ತೊಂದು
ಕುದುರೆ
ಏರಲು
ಬಯಸುವವನು
ವೀರನೂ
ಅಲ್ಲ,
ಶೂರನೂ
ಅಲ್ಲ.
ಅದೇ
ರೀತಿ
ಕುಮಾರಣ್ಣ
ಅಧಿಕಾರ
ಇಲ್ಲದಾಗ
ಏನೂ
ಮಾಡಲಿಲ್ಲ,
ಅಧಿಕಾರ
ಹೋದಾಗ
ಏನು
ಮಾಡುತ್ತೀರಿ?
ಸುರೇಶ್
ಅವರನ್ನು
ಆಯ್ಕೆ
ಮಾಡಿದರೆ
ಏನು
ಲಾಭ
ಎಂಬ
ಪ್ರಶ್ನೆ
ನಿಮ್ಮಲ್ಲಿರಬಹುದು.
ನರೇಗಾ
ಯೋಜನೆಯಲ್ಲೇ
2,000
ಕೋಟಿ
ಅನುದಾನ
ತಂದು
ದೇಶದಲ್ಲೇ
ಮಾದರಿ
ತಾಲೂಕಾಗಿ
ಮಾಡಿರುವುದು
ಸಂಸದ
ಡಿ.ಕೆ.
ಸುರೇಶ್.
ಈ
ಜಿಲ್ಲೆಯ
ಎಲ್ಲಾ
ಕೆರೆಗಳನ್ನು
ತುಂಬಿಸಿ
ಈ
ಭಾಗದ
ಅಂತರ್ಜಲ
ಮಟ್ಟ
ಏರಿಸಿದ್ದರೆ
ಅದು
ಡಿ.ಕೆ.
ಸುರೇಶ್
ಮತ್ತು
ಡಿ.ಕೆ.
ಶಿವಕುಮಾರ್
ಮಾತ್ರ.
ಇಡೀ
ರಾಷ್ಟ್ರದಲ್ಲಿ
ಯಾವುದಾದರೂ
ಲೋಕಸಭಾ
ಕ್ಷೇತ್ರದಲ್ಲಿ
ಪ್ರತಿ
ಎರಡು
ಮೂರು
ರೈತರಿಗೆ
ಒಂದೊಂದು
ಟ್ರಾನ್ಸ್ಫಾರ್ಮರ್
ಗಳನ್ನು
ಕೊಟ್ಟಿದ್ದೇವೆ.
ಇಂತಹ
ವ್ಯವಸ್ಥೆ
ಈ
ಕ್ಷೇತ್ರದ
ಹೊರತಾಗಿ
ರಾಜ್ಯ
ಹಾಗೂ
ರಾಷ್ಟ್ರದಲ್ಲಿ
ಬೇರೆ
ಯಾವುದೇ
ಕ್ಷೇತ್ರದಲ್ಲಿಲ್ಲ.
ಈ
ಜಿಲ್ಲೆಯ
ಬಡ
ಜನರಿಗೆ
ನಿವೇಶನ
ನೀಡಬೇಕು
ಎಂಬುದು
ಡಿ.ಕೆ.
ಸುರೇಶ್
ಅವರ
ಕನಸು.
ಈ
ಬಗ್ಗೆ
ಕುಮಾರಸ್ವಾಮಿ
ಅವರಿಗೆ
ನಾವು
ಮನವಿ
ಮಾಡಿದೆವು.
ಆದರೂ
ಅವರು
ಒಂದು
ಸಭೆಗೂ
ಬರಲಿಲ್ಲ.
ಆಶ್ರಯ
ಸಮಿತಿ
ಸಭೆಗೂ
ಬರಲಿಲ್ಲ.
ನಾವು
ಚರ್ಚೆ
ಮಾಡಿ
60
ಎಕರೆ
ಜಾಗ
ಮೀಸಲಿಡಲು
ತೀರ್ಮಾನ
ಮಾಡಿದೆವು.
ಕಳೆದ
ಬಾರಿ
ಚುನಾವಣೆಯಲ್ಲಿ
ನನ್ನ
ಮನವಿಗೆ
ಸ್ಪಂದಿಸಿ
ನೀವು
ಇಕ್ಬಾಲ್
ಅಹ್ಮದ್
ಅವರನ್ನು
ಆರಿಸಿ
ಕಳುಹಿಸಿದ್ದೀರಿ.
ಈಗ
ಡಿ.ಕೆ.
ಸುರೇಶ್
ಹಾಗೂ
ಇಕ್ಬಾಲ್
ಅವರು
ಸೇರಿ
ಬಡವರಿಗೆ
ನಿವೇಶನ
ನೀಡಲು
100
ಎಕರೆ
ಜಾಗವನ್ನು
ಮೀಸಲಿಡಲು
ತೀರ್ಮಾನಿಸಿದ್ದಾರೆ.
ಚನ್ನಪಟ್ಟಣ
ಹಾಗೂ
ರಾಮನಗರಕ್ಕೆ
ಕುಡಿಯುವ
ನೀರು
ಪೂರೈಸಲು
540
ಕೋಟಿ
ಯೋಜನೆ
ರೂಪಿಸಲಾಗಿದೆ.
English summary
DCM DK Shivakumar Said That I don’t like talking about Kumaraswamy
Story first published: Thursday, March 28, 2024, 16:35 [IST]