Source :- ONE INDIA NEWS
Karnataka
oi-Malathesha M
ಮಳೆ..
ಮಳೆ..
ಮಳೆ..
ಹೀಗೆ
ಎಲ್ಲೆಲ್ಲೂ
ಭರ್ಜರಿ
ಮಳೆಯ
ಅಬ್ಬರ
ಶುರುವಾಗಿದ್ದು,
ಜನ
ನೆಮ್ಮದಿಯ
ನಿಟ್ಟುಸಿರು
ಬಿಟ್ಟಿದ್ದಾರೆ.
ಅದರಲ್ಲೂ
ಬೇಸಿಗೆ
ಸಮಯದಲ್ಲಿ
ತೀವ್ರ
ಸೆಕೆ
ಹಾಗೂ
ಬಿಸಿಗಾಳಿ
ಪರಿಣಾಮ
ಜನ
ತತ್ತರಿಸಿದ್ದರು.
ಆದರೆ
ಇದೀಗ
ಭರ್ಜರಿ
ಮಳೆ
ಸುರಿದ
ಕಾರಣಕ್ಕೆ,
ಜನ
ನಿಟ್ಟುಸಿರು
ಬಿಟ್ಟಿದ್ದಾರೆ.
ರೈತರು
ಖುಷಿಯಾಗಿ
ಕುಣಿದಾಡಿದ್ದಾರೆ,
ಮನುಷ್ಯರು
ಮಾತ್ರ
ಅಲ್ಲ
ಆನೆ
ಕೂಡ
ಕಾಡಲ್ಲಿ
ಮಳೆ
ನೋಡಿ
ಖುಷಿಯಲ್ಲಿ
ಕುಣಿದಾಡಿದೆ!
ಆ
ವಿಡಿಯೋ
ನೋಡಲು
ಮುಂದೆ
ಓದಿ.
ಬೆಂಗಳೂರು
ಸೇರಿದಂತೆ
ಕರ್ನಾಟಕದ
ಬಹುತೆಕ
ಜಿಲ್ಲೆಗಳಿಗೆ
ಕಳೆದ
4
ತಿಂಗಳಿಂದಲು
ಕುಡಿಯುವ
ನೀರಿಗೂ
ಕಷ್ಟವಾಗಿದೆ.
ಯಾಕಂದ್ರೆ
ಕರ್ನಾಟಕದಲ್ಲಿ
ನೀರು
ಪೂರೈಸುವ
ಜಲಾಶಯ
ಒಣಗುತ್ತಾ
ಬರುತ್ತಿವೆ.
ಹಾಗೇ
ಅಂತರ್ಜಲ
ಕೂಡ
ಕುಸಿದು
ಹೋಗಿದೆ
ಹೀಗಾಗಿ
ಬೇಸಿಗೆ
ಆರಂಭ
ಆಗುತ್ತಿದ್ದಂತೆ
ಜನರಿಗೆ
ನೀರು
ಸಿಗದೆ
ಸಾವಿರಾರು
ರೂಪಾಯಿ
ಹಣ
ಕೊಟ್ಟು
ಟ್ಯಾಂಕರ್
ನೀರನ್ನೂ
ತರಿಸಿದ್ದರು.
ಹೀಗಿದ್ದಾಗ
ಮಳೆಗಾಗಿ
ಪ್ರಾರ್ಥನೆ
ಕೂಡ
ಮಾಡುತ್ತಿದ್ದರು.
ಈಗ
ಭರ್ಜರಿ
ಮಳೆ
ಆರಂಭವಾಗಿದ್ದು
ಜನರಿಗೆ
ಮಾತ್ರವಲ್ಲ
ಕಾಡಿನಲ್ಲಿ
ಇರುವ
ಪ್ರಾಣಿಗಳಿಗೂ
ಖುಷಿ
ಆಗಿದೆ.
ಹೀಗಾಗಿ
ಆನೆಯೊಂದು
ಖುಷಿಯಲ್ಲಿ
ಕುಣಿದಾಡಿದ
ವಿಡಿಯೋ
ವೈರಲ್
ಆಗುತ್ತಿದ್ದು,
ವಿಡಿಯೋ
ನೋಡಲು
ಮುಂದೆ
ಓದಿ.
ಮಳೆ
ಬಂದ
ಖುಷಿಯಲ್ಲಿ
ಆನೆ
ಡಾನ್ಸ್!
ಅಂದಹಾಗೆ
ಆನೆಯೊಂದು
ಕಾಡಿನಲ್ಲಿ
ಮಳೆಯನ್ನ
ಕಂಡು
ಖುಷಿಯಾಗಿ
ಕುಣಿದಾಡಿದ
ಘಟನೆ
ನಡೆದಿರುವುದು
ನಮ್ಮ
ಬಂಡೀಪುರದಲ್ಲಿ.
ಕರ್ನಾಟಕದ
ಹೆಮ್ಮೆ
ಬಂಡೀಪುರದಲ್ಲಿ
ಸಾವಿರಾರು
ಪ್ರಾಣಿಗಳು
ಆಶ್ರಯ
ಪಡೆದಿವೆ.
ಅದರಲ್ಲೂ
ಆನೆಗಳ
ಸಂಖ್ಯೆ
ಕೂಡ
ಹೇರಳವಾಗಿದ್ದು,
ಕಳೆದ
ಕೆಲವು
ತಿಂಗಳಿಂದ
ನಿರಂತರವಾಗಿ
ಬಿಸಿಲು
ಇದ್ದ
ಕಾರಣಕ್ಕೆ
ಪ್ರಾಣಿಗಳು
ಪರದಾಡಿದ್ದವು.
ಈ
ಹಿನ್ನೆಲೆಯಲ್ಲಿ
ಮಳೆ
ಬರಲಿ
ಅಂತಾ
ಪ್ರಾಣಿಗಳು
ಕೂಡ
ಕಾಯುತ್ತಿದ್ದವು.
ಇದೀಗ
ಮಳೆ
ತನ್ನ
ಆರ್ಭಟವನ್ನ
ಶುರು
ಮಾಡಿದ್ದು,
ಜನ
ಮತ್ತು
ಅನ್ನದಾತ
ರೈತರ
ಜೊತೆಗೆ
ಪ್ರಾಣಿಗಳು
ಕೂಡ
ಖುಷಿಯಾಗಿವೆ.
ಅದರಲ್ಲೂ
ಬಂಡೀಪುರ
ಅರಣ್ಯದಲ್ಲಿ
ಆನೆಯೊಂದು
ಭರ್ಜರಿಯಾಗಿ
ಸಂತಸ
ಹಂಚಿಕೊಂಡಿದೆ.
ಮಳೆ
ಯಾವ
ಯಾವ
ಜಿಲ್ಲೆಗಳಿಗೆ
ಬರಲಿದೆ?
ಮೇ
ತಿಂಗಳ
15ನೇ
ತಾರೀಖಿನ
ತನಕ
ಅಂದ್ರೆ
ಈ
ತಿಂಗಳಲ್ಲಿ
ಮುಂದಿನ
2
ವಾರ
ಚಿಕ್ಕಮಗಳೂರು,
ತುಮಕೂರು,
ಚಿಕ್ಕಬಳ್ಳಾಪುರ,
ಹಾಸನ,
ರಾಮನಗರ,
ಬೆಂಗಳೂರು
ನಗರ
ಹಾಗೂ
ಬೆಂಗಳೂರು
ಗ್ರಾಮಾಂತರ,
ದಕ್ಷಿಣ
ಕನ್ನಡ,
ಉಡುಪಿ,
ಚಿತ್ರದುರ್ಗ
ಜಿಲ್ಲೆಗಳಿಗೆ
ಗುಡುಗು
ಸಹಿತ
ಭರ್ಜರಿ
ಮಳೆ
ಬೀಳಲಿದೆ
ಎಂದು
ಮುನ್ಸೂಚನೆ
ನೀಡಲಾಗಿದ್ದು.
ಇದರ
ಜೊತೆಗೆ
ಕೊಡಗು
ಮತ್ತು
ಮೈಸೂರು,
ಚಾಮರಾಜನಗರ,
ಬೀದರ್,
ಕಲಬುರಗಿ,
ಯಾದಗಿರಿ
ಜಿಲ್ಲೆಗಳಲ್ಲಿ
ಮುಂದಿನ
ಎರಡು
ವಾರಗಳ
ಕಾಲ
ಗುಡುಗು
ಸಹಿತ
ಭರ್ಜರಿ
ಮಳೆ
ಬೀಳುವುದು
ಗ್ಯಾರಂಟಿ
ಆಗಿದೆ.
English summary
Elephant Is Danced Happily After Seeing The Rain In Summer Of May 2024:
Story first published: Monday, May 6, 2024, 18:29 [IST]